ಭಾನುವಾರ, ಸೆಪ್ಟೆಂಬರ್ 17, 2023

ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ

ಕೊಟ್ಟಿಗೆಹಾರ:ಸಹಕಾರಿ ಸಂಸ್ಥೆಗಳಿಂದ ಸಾಮಾಜಿಕ ಬದಲಾವಣೆ ಸಾಧ್ಯ ಎಂದು ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ sಸ್ಥಾಪಕ ಅಧ್ಯಕ್ಷರಾದ ಅಶ್ವಿನ್ ಬಿ.ಕೆ ಹೇಳಿದರು.
ಬಣಕಲ್‌ನಲ್ಲಿ ನಡೆದ ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದರು.
ಸಹಕಾರ ಸಂಸ್ಥೆಗಳು ಬಡವರು, ಕಾರ್ಮಿಕರು, ಸಾಮಾನ್ಯ ಜನರು ಆರ್ಥಿಕವಾಗಿ ಸಬಲರಾಗಲೂ ಪ್ರಮುಖ ಪಾತ್ರ ವಹಿಸಿವೆ. ಈ ಭಾಗದ ಜನರ ಆರ್ಥಿಕ ಏಳಿಗೆಗೆ ಸಹಕಾರ ಸಂಘಗಳು ನಿರ್ಣಾಯಕ ಪಾತ್ರವನ್ನು ವಹಿಸಿವೆ. ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘವು ಪ್ರಗತಿಯತ್ತ ಸಾಗುತ್ತಿದ್ದು ಎಲ್ಲಾ ಸದಸ್ಯರ ಸಹಕಾರ ಅತ್ಯಗತ್ಯ ಎಂದರು.
ಈ ಸಂದರ್ಭದಲ್ಲಿ ಬಣಕಲ್ ಜನಸ್ನೇಹಿ ಸೌಹಾರ್ದ ಸಹಕಾರ ಸಂಘದ ಉಪಾಧ್ಯಕ್ಷರಾದ ಎಂ.ಎಸ್.ಕಾರ್ತೀಕ್, ನಿರ್ದೇಶಕರಾದ ಡಿ.ಕೆ ಸತೀಶ್, ಆದರ್ಶ್, ರಘು, ಶಶಾಂಕ್, ಗಾನವಿ, ಕವಿತ, ಪ್ರಿಯಾಂಕ, ಮಹೇಂದ್ರ, ಮುಖ್ಯ ಕಾರ್ಯ ನಿರ್ವಾಹಕರಾದ ಶ್ವೇತಾ, ಸದಸ್ಯರಾದ ಎನ್.ಟಿ ದಿನೇಶ್, ಸಿಬ್ಬಂದಿಗಳಾದ ರಶ್ಮಿ, ನಿಶ್ಮಿತಾ ಇದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ