ಶನಿವಾರ, ಮೇ 21, 2022

ಡೆಂಗ್ಯೂ ಜ್ವರ:ಜಾಗೃತೆ ವಹಿಸಿದರೆ ರೋಗ ತಡೆ ಸಾಧ್ಯ

ಕೊಟ್ಟಿಗೆಹಾರ:ಮುಂಜಾಗೃತೆ ವಹಿಸುವುದರಿಂದ ಡೆಂಗ್ಯೂ ಜ್ವರ ಬಾರದಂತೆ ತಡೆಯಲು ಸಾಧ್ಯವಾಗುತ್ತದೆ ಎಂದು ಬಣಕಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಸುರಕ್ಷ ಅಧಿಕಾರಿ ಶಾಂತ ಹೇಳಿದರು.
ಕಪುಚಿನ್ ಕೃಷಿಕ ಸೇವಾ ಕೇಂದ್ರ, ವಿಮುಕ್ತಿ  ಸ್ವಸಹಾಯ ಸಂಘಗಳ ಒಕ್ಕೂಟ ಬಣಕಲ್ ವತಿಯಿಂದ ಬಣಕಲ್‌ನಲ್ಲಿ ನಡೆದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರೋಗ ಬಂದ ಮೇಲೆ ಜಾಗೃತರಾಗುವುದಕ್ಕಿಂತ ಪೂರ್ವದಲ್ಲಿ ಅದು ಅಂಟಿಕೊಳ್ಳದAತೆ ಎಚ್ಚರಿಕೆ ವಹಿಸುವುದು ಅತ್ಯಂತ ಮುಖ್ಯ. ಸೊಳ್ಳೆಕಡಿತದಿಂದ ಪಾರಾಗಲು ಸೊಳ್ಳೆ ಪರದೆಗಳನ್ನು ಉಪಯೋಗಿಸುವುದು, ಸಿಮೆಂಟ್ ತೊಟ್ಟಿ, ಹಲವಾರು ದಿನಗಳಿಂದ ನೀರಿನಿಂದ  ತುಂಬಿರುವ ಹೂಕುಂಡಗಳಲ್ಲಿನ, ಪ್ಲಾಸ್ಟಿಕ್ ಸೇರಿದಂತೆ ನೀರು ನಿಲ್ಲುವ ವಸ್ತುಗಳನ್ನು ಆಗಾಗ ಸ್ವಚ್ಚಗೊಳಿಸುವುದರಿಂದ ಸೊಳ್ಳೆಯ ಸಂತಾನೋತ್ಪತ್ತಿ ನಿಂತಾAತಾಗಿ ರೋಗ ಹರಡುವುದು ಕಡಿಮೆಯಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರಾದ ಸುನೀತ, ಸ್ನೇಯಪ್ರಿಯ, ನಂಬ್ರಿನ್, ವಿಮುಕ್ತಿ ಬಣಕಲ್‌ನ ನಿರ್ದೇಶಕರಾದ ಫಾದರ್ ವಿನ್ಸೆಂಟ್ ಡಿ ಸೋಜಾ, ಕಾರ್ಯಕರ್ತೆ ವಿಂದ್ಯಾ, ಒಕ್ಕೂಟದ ಅಧ್ಯಕ್ಷರಾದ ಯಶೋಧ, ಕಾರ್ಯದರ್ಶಿ ಸಾವಿತ್ರಿ, ಖಜಾಂಚಿ ಸಾವಿತ್ರಿ, ಮಾಜಿ ಅಧ್ಯಕ್ಷೆ ರಾಜಮ್ಮ, ಸದಸ್ಯರಾದ ಪ್ರಮೋದಿನಿ, ನೇತ್ರ, ಲಲಿತ, ಪವಿತ್ರ, ಮಂಜುಳಾ, ಬೇಬಿ, ಶಾಲಿನಿ, ಸುನಿತ, ಗೌರಮ್ಮ ಮುಂತಾದವರು ಇದ್ದರು.