ಮಂಗಳವಾರ, ಫೆಬ್ರವರಿ 5, 2013

ಹೊಯ್ಸಳರ ಮೂಲಸ್ಥಾನ ಅಂಗಡಿ

ಹೊಯ್ಸಳರ ಮೂಲಸ್ಥಾನ ಅಂಗಡಿ, ಜಿಲ್ಲೆಯಿಂದ ೫೦ ಕಿ.ಮೀ ತಾಲ್ಲೂಕಿನಿಂದ ೨೦ ಕಿ.ಮೀ. ಮೂಡಿಗೆರೆ ತಾಲ್ಲೂಕಿನ ಒಂದು ಚಿಕ್ಕ ಹಳ್ಳಿ. ೧೧,೧೨ ನೇ ಶತಮಾನದ ಶಾಸನದಲ್ಲಿ ಇದನ್ನುಸೊಸೆಯೂರು, ಸೊಸೆ ಊರು ಎಂದು ಕರೆದಿದೆ. ಬುಕ್ಕರಾಯನ ಕಾಲದಲ್ಲಿ ೧೩೫೯ ರಲ್ಲಿ ಇದೇ ಹೆಸರಿತ್ತು. ಆದರೆ ಅಚ್ಯುತರಾಯನ ಕಾಲದಲ್ಲಿ ೧೫೩೯ ರ ಹೊತ್ತಿಗೆ ಅಂಗಡಿಯೆಂಬ ಹೆಸರು ಪ್ರಚಾರದಲ್ಲಿತ್ತು. ವಿಷ್ಣುವರ್ಧನನ ಕಾಲದಲ್ಲಿ ಶಶಪುರ ಹಾಗೂ ಶಶಕಪುರ ಎಂಬ ಹೆಸರುಗಳಿವೆ. ಈ ಸೋಸೆಯೂರೆ ಹೊಯ್ಸಳರ ಮೂಲ ಸ್ಥಾನ. ಇಲ್ಲಿ ಸಳನು ಹುಲಿಯನ್ನು ಕೊಂದು ಹೊಯ್ಸಳ ವಂಶದ ಹೆಸರಿಗೆ ಕಾರಣನಾದವನು ಎಂದು ಶಾಸನ ತಿಳಿಸುತ್ತಿದೆ. ನೃಪಕಾಮ ಮಗನಾದ ವಿನಯಾದಿತ್ಯನು ದ್ವಾರಸಮುದ್ರಕ್ಕೆ ತನ್ನ ರಾಜಧಾನಿ (ಈಗಿನ ಹಳೇಬೀಡು) ಬದಲಾಯಿಸಿದನು. ಸಳನ ವಂಶದ ೪ ನೇಯ ರಾಜನೇ ವಿಷ್ಣುವರ್ಧನ ಪ್ರಭಾವಶಾಲಿಯಾಗಿದ್ದ ಹೊಯ್ಸಳರ ಸ್ವತಂತ್ರ ರಾಜ.
ಇಲ್ಲಿ ಸಪ್ತ ಮಾತೃಕೆಗಳಿವೆ. ೫ ವಿಗ್ರಹಗಳು ಮಾತ್ರ ಇಲ್ಲಿವೆ. ಅವುಗಳೆಂದರೆ, ಬ್ರಾಹ್ಮಿಣಿ, ಕೌಮಾರಿ, ವೈಷ್ಣವಿ, ವರಾಹಿ, ಮಹೇಶ್ವರಿ ಇವುಗಳು. ಇಂದ್ರಾಣಿ ಮತ್ತು ಚಾಮುಂಡಿ ಸೇರಿ ಸಪ್ತ ಮಾತೃಕೆಗಳು ಈ ಭಾಗದಲ್ಲಿ ವಸಂತ ಪರಮೇಶ್ವರ ಅಥವಾ ವೈಷ್ಣವಿ ದೇವಿಯ ಪ್ರಧಾನ ಪೂಜೆ ಹಬ್ಬವಾಗಿದೆ. ಚೈತ್ರ, ವೈಶಾಖ ಮಾಸದಲ್ಲಿ ಸುಗ್ಗಿ ಹಬ್ಬ ವಿಜೃಂಭಣೆಯಿಂದ ನಡೆಯುತ್ತದೆ. ಇಲ್ಲಿ ಮುಖ್ಯ ದೇವತೆ ವಸಂತಮ್ಮ ಅಥವಾ ವಾಸಂತಿ ದೇವಿ ಕುಲದೇವತೆಯಾಗಿದೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ