ಮಂಗಳವಾರ, ಫೆಬ್ರವರಿ 5, 2013
ಶ್ರೀ ಕ್ಷೇತ್ರ ಹೊರನಾಡು ಜಿಲ್ಲೆಯಿಂದ ೧೦೦ ಕಿ.ಮೀ.ಮೂಡಿಗೆರೆ ತಾಲ್ಲೂಕಿನಿಂದ ೨ ಕಿ.ಮೀ ಹೊರನಾಡಿನ ಆದಿದೇವತೆ ಶ್ರೀ ಆದಿಶಕ್ತ್ಯಾತ್ಮಕ ಅನ್ನಪೂರ್ಣೇಶ್ವರಿ ದೇವಾಲಯವು ಹೊರನಾಡು ಮೇರುತಿ ಪರ್ವತ ಶ್ರೇಣಿಯ ತಪ್ಪಲಿನಲ್ಲಿದೆ. ಪುಟ್ಟ ಗುಡ್ಡದ ಮೇಲಿರುವ ಶ್ರೀ ಆದಿ ಶಕ್ತ್ಯಾತ್ಮಕ ಅನ್ನ ಪೂರ್ಣೇಶ್ವರಿ ದೇವಾಲಯ ಸವಿಸ್ತಾರವಾದುದು. ಅಲ್ಲಿಯ ನಿಸರ್ಗ ರಮಣೀಯ ಪರಿಸರವಿದೆ. ಅಪೂರ್ವವಾದ ಪಶ್ಚಿಮ ಘಟ್ಟಗಳ ತಾಣ ಪ್ರವಾಸಿ ಕೇಂದ್ರವಾಗಿದ್ದು, ಜನಪ್ರಿಯವಾಗಿದೆ. ದೇಶದ ವಿವಿದೆಡೆಯಿಂದ ಭಕ್ತ ಸಮೂಹವನ್ನು ಆಕರ್ಷಿಸಿದೆ. ಹಲವು ಐತಿಹ್ಯಗಳು ಶ್ರೀ ಕ್ಷೇತ್ರವನ್ನು ಪ್ರಭಾವಗೊಳಿಸಿವೆ. ಎಲ್ಲಿ ನೋಡಿದರು ಹಸಿರು ನೀಲಿ ಆಗಸದೆಡೆಗೆ ಚಾಚಿ ನಿಂತ ಗಿರಿ ಶಿಖರ ತರುಲತೆಗಳು ಅವುಗಳ ನಡುವೆ ಮಂಜುಳ ನೀನಾದ ಗೈಯ್ಯುತ್ತಾ ಹರಿದು ಬರುವ ಭದ್ರಾ ನದಿ ಪರಾತ್ಪರ ಚಿಂತನೆಗೆ ಯೋಗ್ಯವಾದ ಪ್ರಶಾಂತ ಸ್ಥಳ. ಅಪರೂಪದ ಜಲಧಾರೆಗಳು ಸುತ್ತಲೂ ದಟ್ಟವಾದ ಕಾಡು, ಕಾಫಿ, ಭತ್ತ, ಅಡಿಕೆ, ಏಲಕ್ಕಿ ತೋಟಗಳಿಂದ ಕಂಗೊಳಿಸುವ ನೆಲೆ ಸರ್ವ ಧರ್ಮ ಸಮನ್ವಯತೆಯ ಬೀಡಾಗಿದೆ. ಭದ್ರಾ ನದಿಯ ಸಾಂಗತ್ಯದಿಂದ ಪುಣ್ಯ ಕ್ಷೇತ್ರವಾಗಿದೆ. ಈ ಕ್ಷೇತ್ರವು ಅಗಸ್ತ್ಯ ಮಹಾ ಮುನಿಗಳಿಂದ ಪ್ರತಿಷ್ಠಾಪಿಸಲ್ಪಟ್ಟ ಅನ್ನಪೂರ್ಣೇಶ್ವರಿ ದೇವಿಯ ಪ್ರಭಾವದೊಂದಿಗೆ ಅವಿಚ್ಛಿನ್ನ ಪರಂಪರೆಯಾಗಿ ಮುಂದುವರೆದು ಬಂದಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)

ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ