ಭಾನುವಾರ, ನವೆಂಬರ್ 17, 2024

ತೇಜಸ್ವಿ ಪ್ರತಿಷ್ಠಾನದಲ್ಲಿ ಕನ್ನಡ ಸಂಸ್ಕೃತಿ ಮತ್ತು ತೇಜಸ್ವಿ ವಿಚಾರಗೋಷ್ಠಿ

ಕೊಟ್ಟಿಗೆಹಾರ:ಬದುಕಿದಂತೇ ಬರೆದ ಬರೆದಂತೇ ಬದುಕಿದ ತೇಜಸ್ವಿ ಅವರನ್ನು ವ್ಯಕ್ತಿಪೂಜೆ ಮಾಡದೇ ವಿಚಾರಪೂಜೆ ಅಥವಾ ವಿಚಾರಗಳನ್ನು ಅರಿಯುವುದು ಮುಖ್ಯವಾದದ್ದು ಎಂದು ಲೇಖಕ ಡಾ.ಸಂಪತ್ ಬೆಟ್ಟಗೆರೆ ಹೇಳಿದರು.
ಕೊಟ್ಟಿಗೆಹಾರದ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ಬಣಕಲ್ ಕಸಾಪ ವತಿಯಿಂದ ನಡೆದ ಕನ್ನಡ ಸಂಸ್ಕೃತಿ ಮತ್ತು ತೇಜಸ್ವಿ ವಿಚಾರ ಗೋಷ್ಠಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ ಮಾತನಾಡಿದರು.
ತೇಜಸ್ವಿ ಅವರು ಮೂಡಿಗೆರೆಗೆ ಬಂದದ್ದು ಭುವನದ ಭಾಗ್ಯ. ತೇಜಸ್ವಿ ಅವರಿಗೆ ವಿಭಿನ್ನವಾದ ಅನುಭವವನ್ನು ನೀಡಿದ್ದು ಮೂಡಿಗೆರೆ. ಭೂಮಿ ಮತ್ತು ವ್ಯಕ್ತಿಪ್ರಜ್ಞೆ ಒಂದಾಗಿ ಘಟಿಸಿದ ವ್ಯಕ್ತಿತ್ವ ತೇಜಸ್ವಿ ಅವರದು. ವಿಜ್ಞಾನವನ್ನು ಕಲಾಕೃತಿಯ ದೃಷ್ಟಿಯಲ್ಲಿ ನೋಡುವ ಪ್ರಯತ್ನವನ್ನು ತೇಜಸ್ವಿ ಅವರು ಮಾಡಿದ್ದಾರೆ. ಸಾಹಿತ್ಯ ಬೇರೆ ಮನುಷ್ಯ ಬೇರೆ ಅಲ್ಲ. ಬದುಕು ಸಂಸ್ಕೃತಿಯಾದರೇ ಸಂಸ್ಕೃತಿಯ ರೀತಿಯನ್ನು ದಾಖಲಿಸುವುದು ಸಾಹಿತ್ಯವಾಗುತ್ತದೆ ಎಂದರು.
ಇAದು ತೇಜಸ್ವಿ ಅವರ ವ್ಯಕ್ತಿತ್ವ ಮತ್ತು ಸಾಹಿತ್ಯ ತುಂಬಾ  ಲಘುವಾಗಿ ಚಿತ್ರಿಸುವ ಪ್ರಯತ್ನಗಳು ಆಗುತ್ತಿರುವುದು ತುಂಬಾ ವಿಷಾದಕರ. ತೇಜಸ್ವಿ ಅವರು ಜಾತ್ಯಾತೀತವಾದಿ ನಿಲುವಿನ ಚಿಂತಕ. ಅವರು ಎಂದಿಗೂ ಜಾತಿವಾದಿಯಲ್ಲ, ಪ್ರೀತಿಯ ಸಂತನAತೆ ಬದುಕಿದವರು. ಆದರೆ ಇಂದು ಸುಳ್ಳಾದ ಪ್ರಕ್ಷಿಪ್ತಗಳನ್ನು ಸೃಷ್ಟಿಸಿದ ಬರವಣ ಗೆ ಮತ್ತು ಭಾಷಣಗಳಿಂದ ಅವರ ವಿಚಾರಗಳನ್ನು ತಪ್ಪಾಗಿ ಅರ್ಥೈಸಿ ವ್ಯಾಖ್ಯಾನಿಸಲು ಕೆಲವು ಸ್ವಹಿತಾಸಕ್ತಿ ಚಿಂತನೆಯವರು ಮಾಡುತ್ತಿರುವುದನ್ನು ನಾವು ಖಂಡಿಸುವ ಪ್ರಯತ್ನ ಮಾಡಬೇಕು ಎಂದರು.
ಕಸಾಪ ಜಿಲ್ಲಾ  ಪ್ರಧಾನ ಸಂಚಾಲಕ ಮಗ್ಗಲಮಕ್ಕಿ ಗಣೇಶ್ ಮಾತನಾಡಿ ಕವಿಗೋಷ್ಠಿಯಲ್ಲಿ ಭಾಗವಹಿಸುವ ಕವಿಗಳು ಕವಿತೆಗೆ ಮಾತ್ರ ಸೀಮಿತವಾಗದೇ ತಮ್ಮ ಬರವಣ ಗೆಯನ್ನು ನಿರಂತರವಾಗಿ ಮುಂದುವರಿಸಿಕೊAಡು ಹೋಗಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ತು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾ ಬರುತ್ತಿದ್ದು ಇಂತಹ ಕಾರ್ಯಕ್ರಮಗಳ ಸದ್ಬಳಕೆಯನ್ನು ಯುವಕವಿಗಳು ಮಾಡಿಕೊಳ್ಳಬೇಕಿದೆ ಎಂದರು.   
 ಮೂಡಿಗೆರೆ ತಾಲ್ಲೂಕು ಕಸಾಪ ಅಧ್ಯಕ್ಷ ಡಿ.ಕೆ.ಲಕ್ಷ್ಮಣಗೌಡ ಮಾತನಾಡಿ ಬಣಕಲ್ ಹೋಬಳಿ ಕಸಾಪವೂ ಸಕ್ರಿಯವಾಗಿ ಸಾಹಿತ್ಯ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದೆ. ಉತ್ಸಾಹಿ ಯುವಕರ ತಂಡ ಈ ಘಟಕದಲ್ಲಿದ್ದು ನಿರಂತರವಾಗಿ ಸಾಹಿತ್ಯ ಕಾರ್ಯಗಳು ನಡೆಯಲಿ ಎಂದರು. 
ಭಾರತಿಯ ಕಿಸಾನ್ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಂಜಯಗೌಡ ಮಾತನಾಡಿ ಕನ್ನಡ ಸಂಸ್ಕೃತಿಯ ಶ್ರೀಮಂತಿಕೆಯನ್ನು ಯುವಪೀಳಿಗೆ ಅರಿಯಬೇಕಿದೆ. ಜಾನಪದ ಸೊಗಡಿನ ಗೀತೆಗಳು ಈ ಪರಂಪರೆಯ ಭಾಗವಾಗಿದ್ದು ಇದನ್ನು ಉಳಿಸಿ ಬೆಳೆಸಬೇಕಿದೆ ಎಂದರು. 
ಬಣಕಲ್ ಕಸಾಪ ಅಧ್ಯಕ್ಷ ಬಿ.ಕೆ.ಲೋಕೇಶ್ ಮಾತನಾಡಿ ಕಾವ್ಯ ಸ್ಪಂದನದಲ್ಲಿ ಭಾಗವಹಿಸಿದ ಯುವಕವಿಗಳ ಕವನಗಳು ಪುಸ್ತಕ ರೂಪದಲ್ಲಿ ತರುವ ಯೋಚನೆ ಇದೆ. ಕಾವ್ಯ ಮನಸ್ಸನ್ನು ಪ್ರಪುಲ್ಲಗೊಳಿಸುತ್ತದೆ. ಕಾವ್ಯದ ಆಸ್ವಾದನೆ ಬದುಕಿನ ಜಂಜಾಟಗಳ ಒತ್ತಡವನ್ನು ಕೂಡ ಮರೆಸಬಲ್ಲದಾಗಿದೆ ಎಂದರು.
ನಿವೃತ್ತ ಉಪನ್ಯಾಸಕ ಬಿ.ಇ.ಬಿಳಿಯಪ್ಪ, ಕಸಾಪದ ಪ್ರಕಾಶ್ ಬಕ್ಕಿ, ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆಯ ರಾಜ್ಯ ಅಧ್ಯಕ್ಷ ಎಂ.ಎಸ್.ನಾಗರಾಜ್, ಕಸಾಪ ಪದಾಧಿಕಾರಿಗಳಾದ ಪೂರ್ಣೇಶ್ ಹೆಬ್ಬರಿಗೆ, ಭಕ್ತೇಶ್, ವಸಂತ್ ಹಾರ್ ಗೋಡು, ಸುಪ್ರೀತ್ ಬೆಟ್ಟಗೆರೆ, ರಾಮಚಂದ್ರ, ಸಂಜಯಗೌಡ, ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ಸಂಯೋಜಕ ನಂದೀಶ್ ಬಂಕೇನಹಳಿ, ಸಿಬ್ಬಂದಿ ಸತೀಶ್, ಸಂಗೀತಾ ಮತ್ತಿತರರು ಇದ್ದರು.


ಜನಮನ ಸೂರೆಗೊಂಡ ಕಾವ್ಯಸ್ಪಂದನ

ವಿಚಾರ ಸಂಕಿರಣದ ನಂತರ ಕಾವ್ಯಸ್ಪಂದನ ಕಾರ್ಯಕ್ರಮದಲ್ಲಿ ಬಳ್ಳಾರಿ, ಬಿಜಾಪುರ ಸೇರಿದಂತೇ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಕವಿಗಳು ಕವನ ವಾಚನ ಮಾಡಿದರು. ತೇಜಸ್ವಿ ಬದುಕು ಬರಹ ವಿಷಯದ ಬಗ್ಗೆ ಕವಿಗಳಾದ ಪೂರ್ಣೇಶ್ ಹೆಬ್ಬರಿಗೆ, ಕುಸುಮ ಮಂಜುನಾಥ್, ಡಿ.ಫ್ರಾನ್ಸಿಸ್ ಕ್ಷೇವಿಯರ್, ಅಲ್ತಾಪ್ ಬಿಳುಗುಳ, ಲಕ್ಷö್ಮಣ್ ಬಿ ಹೊಸಹಳ್ಳಿ, ಶಕುಂತಲಾ ಪಾಟೀಲ್, ಮಂಜುನಾಥ್ ರಾಠೋಡ್, ಸೌಭಾಗ್ಯ ಮಹಾಂತೇಶ್, ಹೆಸಗಲ್ ವೆಂಕಟೇಶ್, ವೇದ ಅಶೋಕ್, ಡಾ.ವೀರೇಶ್ ಕುಮಾರ್, ಶಾಲಿನಿ ಕುಂದೂರು ಕವನ ವಾಚನ ಮಾಡಿದರು. ಮಂಜುನಾಥ್ ರಾಠೋಡ್ ಬಿಜಾಪುರ (ಪ್ರಥಮ), ಲಕ್ಷö್ಮಣ್ ಬಿ ಹೊಸಳ್ಳಿ (ದ್ವಿತೀಯ), ವೇದಾ ಅಶೋಕ್ (ತೃತೀಯ) ಬಹುಮಾನವನ್ನು ಪಡೆದರು.

ಶುಕ್ರವಾರ, ಅಕ್ಟೋಬರ್ 4, 2024

ಇಂದಿನಿಂದ (ಅಕ್ಟೋಬರ್ ೫) ರಾಜ್ಯ ಮಟ್ಟದ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ

ಚಿಕ್ಕಮಗಳೂರು:ಭಾರತ್ ಮತ್ತು ಸ್ಕೌಟ್ಸ್ ಗೈಡ್ಸ್ ಸಂಸ್ಥೆಯಿಂದ ಇಂದಿನಿಂದ ರಾಜ್ಯಮಟ್ಟದ ಕಬ್ಸ್ ಮತ್ತು ಬುಲ್ ಬುಲ್ಸ್ ಉತ್ಸವ ನಡೆಯಲಿದೆ ಎಂದು ಸಂಸ್ಥೆಯ ರಾಜ್ಯ ಉಪಾಧ್ಯಕ್ಷ ಎ.ಎನ್.ಮಹೇಶ್ ಹೇಳಿದರು.
ಈ ಬಗ್ಗೆ ಹೇಳಿಕೆ ನೀಡಿರುವ ಅವರು, ನಗರದ ಆದಿ ಚುಂಚನಗಿರಿ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಕಾರ್ಯಕ್ರಮ ಆಯೋಜಿಸಿದ್ದು ಸಕಲ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಉತ್ಸವದ ಉದ್ಘಾಟನೆ ನೆರವೇರಿಸಲಿದ್ದಾರೆ. ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಭಾಗವಹಿಸಲಿದ್ದು ರಾಣ  ಚೆನ್ನಮ್ಮ ವಿವಿ ಕುಲಪತಿ ಎಸ್.ವಿ.ತ್ಯಾಗರಾಜ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿಜಿಆರ್ ಸಿಂಧ್ಯಾ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಲಿದ್ದು, ಎಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ನಾಯಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಉತ್ಸವದಲ್ಲಿ ರಾಜ್ಯದ ೬ ರಿಂದ ೧೦ ವರ್ಷ ವಯೋಮಾನದ ಎಳೆಯರು ಭಾಗವಹಿಸಲಿದ್ದಾರೆ. ಅವರಿಗೆ ಸಾಹಸಮಯ ಚಟುವಟಿಕೆಗಳು, ಹೊಸಸಂಚಾರ, ಶೈಕ್ಷಣ ಕ ಸ್ಥಳಗಳ ಸಂದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಧಿಕಾರಿ ಮತ್ತು ಜನಪ್ರತಿನಿಧಿಗಳ ಸಹಕಾರದೊಂದಿಗೆ ಎಲ್ಲ ಮಕ್ಕಳಿಗೂ ಉತ್ತಮ ಊಟ, ತಂಗಲು ವ್ಯವಸ್ಥೆ ಕಲ್ಪಿಸಲಾಗುವುದು. ಉತ್ಸವದ ಅಂಗವಾಗಿ ಒಂದು ಆಕರ್ಷಕ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಾಗುವುದು. ಉತ್ಸವದ ಹಿನ್ನಲೆಯಲ್ಲಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದ ವತಿಯಿಂದ ಕೀಟ ಪ್ರದರ್ಶನವೂ ನಡೆಯಲಿದೆ ಎಂದು ತಿಳಿಸಿದ್ದಾರೆ.

ಮಂಗಳವಾರ, ಅಕ್ಟೋಬರ್ 1, 2024

ಇಡಕಣಿ ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆ

ಕಳಸ:ಸ್ವಸಹಾಯ ಸಂಘದ ಸದಸ್ಯರು ಸಂಜೀವಿನಿ ಒಕ್ಕೂಟಕ್ಕೆ ಸೇರಿ ಒಕ್ಕೂಟದ ಅನುದಾ£ದ ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಇಡಕಣ  ಸಂಜೀವಿನಿ ಗ್ರಾ.ಪಂ ಮಟ್ಟದ ಒಕ್ಕೂಟದ  ಅಧ್ಯಕ್ಷರಾದ ವೈಶಾಲಿ ಹೇಳಿದರು.
 ಹಿರೇಬೈಲ್‌ನಲ್ಲಿ ನಡೆದ ಕಳಸ ತಾಲ್ಲೂಕಿನ ಇಡಕಣ  ಗ್ರಾ.ಪಂ ಮಟ್ಟದ ಸಂಜೀವಿನಿ ಒಕ್ಕೂಟದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆರ್ಥಿಕ ಸ್ವಾವಲಂಬನೆ ಮಾತ್ರವಲ್ಲದೇ ಸರ್ವಾಂಗೀಣ ಏಳಿಗೆಗೆ ಸಂಜೀವಿನಿ ಒಕ್ಕೂಟ ಸಹಕಾರಿಯಾಗಿದೆ. ಸಾಮಾಜಿಕವಾಗಿ ಸಂಘಟಿತವಾಗಿ ಅಭಿವೃದ್ದಿ ಹೊಂದಲು ಇಂತಹ ಒಕ್ಕೂಟಗಳು ಸಹಕಾರಿಯಾಗಿದೆ. ಗ್ರಾಮೀಣ ಭಾಗದ ಮಹಿಳೆಯರು ಆತ್ಮಾಭಿಮಾನದ ಬದುಕು ಕಟ್ಟಿಕೊಳ್ಳಲು ಸಂಜೀವಿನಿ ಒಕ್ಕೂಟ ಕಾರಣವಾಗಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ವಲಯ ಮೇಲ್ವಿಚಾರಕರಾದ ಅಬ್ದುಲ್ ನಾಝೀಮ್, ಮಹಿಳೆಯರು ಸಂಘಗಳ ಮೂಲಕ ಉಳಿತಾಯ ಮಾಡಿ ಉಳಿತಾಯ ಮನೋಭಾವವನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಸಂಘಗಳ ಮೂಲಕ ಮುಖ್ಯವಾಹಿನಿಗೆ ಬರಲು ಸಾಧ್ಯವಾಗಿದೆ ಎಂದರು.
ವರದಿ ಮಂಡನೆ ಮಾಡಿ ಮಾತನಾಡಿದ ಮುಖ್ಯ ಪುಸ್ತಕ ಬರಹಗಾರರಾದ ದೀಕ್ಷಾ, ಒಕ್ಕೂಟದಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಒಕ್ಕೂಟದ ಸಮುದಾಯ ಬಂಡವಾಳ ನಿಧಿಯನ್ನು ಬಳಸಿಕೊಂಡು ಉತ್ತಮ ಆದಾಯ ಗಳಿಸುವ ಜೊತೆಗೆ ಸಂಘದ ಸದಸ್ಯರು  ಮಕ್ಕಳಿಗೆ ವಿದ್ಯಾಬ್ಯಾಸ ಕೊಡಿಸಲು ಸಾಧ್ಯವಾಗಿದೆ. ಬಡತನ ತೀವ್ರತೆಯನ್ನು ಕಡಿಮೆಗೊಳಿಸುವುದು, ಸಾಮಾಜಿಕ ಸುಧಾರಣೆ, ಮಹಿಳಾ ಸಬಲೀಕರಣ, ಕೌಶಲ್ಯಭಿವೃದ್ದಿ ನೀಡುವುದು ಸೇರಿದಂತೇ ಹಲವು ಅಂಶಗಳು ಸಂಜೀವಿನಿ ಒಕ್ಕೂಟದ ಗುರಿಯಾಗಿದೆ ಎಂದರು.
 ವಾರ್ಷಿಕ ಸಭೆಯಲ್ಲಿ ಒನ್ ಜಿ ಪಿ ಒನ್ ಉತ್ಪನ್ನವಾದ ಉಪ್ಪಿನಕಾಯಿಯನ್ನು ಅನಾವರಣಗೊಳಿಸಲಾಯಿತು. ಈ ಹಿಂದೆ ಕಾರ್ಯನಿರ್ವಹಿಸಿದ ಪದಾಧಿಕಾರಿಗಳಿಗೆ ಸನ್ಮಾನ ಮಾಡಲಾಯಿತು .
 
ಈ ಸಂದರ್ಭದಲ್ಲಿ  ಒಕ್ಕೂಟದ ಕಾರ್ಯದರ್ಶಿ ಕವಿತಾ, ವಲಯ ಮೇಲ್ವಚಾರಕರಾದ ಅಭಿಜಿತ್, ಕಳಸ ಸಂಜೀವಿನಿ ತಾಲೂಕು ಮಟ್ಟದ ಒಕ್ಕೂಟದ ಖಜಾಂಚಿ ಛಾಯಾ, ಇಡಕಣ  ಗ್ರಾ.ಪಂ ಪಿಡಿಓ ಪ್ರಕಾಶ್, ಅಧ್ಯಕ್ಷರಾದ ರವೀಂದ್ರ, ಒಕ್ಕೂಟದ ಸಿಬ್ಬಂದಿಗಳಾದ ಸಂದ್ಯಾ ಎನ್, ಸರೋಜ, ಜಯಶ್ರೀ, ಕವಿತಾ, ಒಕ್ಕೂಟ ಹಾಗೂ ಗ್ರಾ.ಪಂ ಸದಸ್ಯರು ಇದ್ದರು.

ಭಾನುವಾರ, ಸೆಪ್ಟೆಂಬರ್ 29, 2024

ಅಕ್ಟೋಬರ್ ೪ ಕ್ಕೆ ರೇಬಿಸ್ ಉಚಿತಾ ಲಸಿಕಾ ಕಾರ್ಯಕ್ರಮ


ಬಣಕಲ್:ಅಕ್ಟೋಬರ್ ೪ ರಂದು ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆಯಲ್ಲಿ ಸಾಕು ನಾಯಿಗಳಿಗೆ ರೇಬಿಸ್ ರೋಗದ ವಿರುದ್ದ ಉಚಿತ ಲಸಿಕಾ ಕಾರ್ಯಕ್ರಮ ಆಯೋಜಿಸಿಲಾಗಿದೆ ಎಂದು ಮೂಡಿಗೆರೆ ಪಶು ಆಸ್ಪತ್ರೆಯ ಮುಖ್ಯ ಪಶು ವೈದ್ಯಾಧಿಕಾರಿಗಳಾದ ಡಾ.ಸಿ.ರಮೇಶ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು ಅಕ್ಟೋಬರ್ ೪ ರ ಶುಕ್ರವಾರ ಬೆಳಗ್ಗೆ ೧೦ ರಿಂದ ಸಂಜೆ ೪ ರವರೆಗೆ ಮೂಡಿಗೆರೆ ಪಟ್ಟಣದ ಪಶು ಆಸ್ಪತ್ರೆ ಆವರಣದಲ್ಲಿ  ಮೂಡಿಗೆರೆಯ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯಿಂದ ಮೂಡಿಗೆರೆ ನಗರ ವ್ಯಾಪ್ತಿಯ  ಸಾಕು ನಾಯಿಗಳಿಗೆ ರೇಬಿಸ್ ರೋಗದ ವಿರುದ್ಧ ಉಚಿತ ಲಸಿಕಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು ಎಲ್ಲಾ ಶ್ವಾನ ಪ್ರಿಯರು ಹಾಗೂ ಅದರ ಮಾಲೀಕರುಗಳು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ತೇಜಸ್ವಿ ಪ್ರತಿಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ


ಕೊಟ್ಟಿಗೆಹಾರ:ಕೊಟ್ಟಿಗೆಹಾರದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಭೇಟಿ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮೂಡಿಗೆರೆ ಮಾರ್ಗವಾಗಿಯೇ ಸಂಚರಿಸುತ್ತಿದ್ದರೂ ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಲು ಸಾಧ್ಯವಾಗಿರಲಿಲ್ಲ. ತೇಜಸ್ವಿ ಪ್ರತಿಷ್ಠಾನಕ್ಕೆ ಭೇಟಿ ನೀಡಿದ್ದು  ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನದಲ್ಲಿ ವಸ್ತು ಸಂಗ್ರಹಾಲಯ, ಕೀಟ ಸಂಗ್ರಹಾಲಯ, ಗ್ರಂಥಾಲಯಗಳು ಜ್ಞಾನಾಸಕ್ತರಿಗೆ ಉಪಯುಕ್ತವಾಗಿವೆ. ಉತ್ತಮ ನಿರ್ವಹಣೆ ಮಾಡಲಾಗಿದ್ದು ಅಗತ್ಯವಿದ್ದಲ್ಲಿ ಪ್ರತಿಷ್ಠಾನದ ಅಭಿವೃದ್ದಿಗೆ ಕೇಂದ್ರ ಸರ್ಕಾರದ ಅನುದಾನವನ್ನು ತರಲು ಪ್ರಯತ್ನಿಸಲಾಗುವುದು ಎಂದರು.

ಭಾನುವಾರ, ಸೆಪ್ಟೆಂಬರ್ 22, 2024

ಕನ್ನಡ ಭಾಷಾಭಿಮಾನ ಮೂಡಿಸುವ ಕನ್ನಡ ಜ್ಯೋತಿ ರಥಯಾತ್ರೆ

ಕಡೂರು : ಜನಜಾಗೃತಿಯ ಮೂಲಕ ಭಾಷಾಭಿಮಾನವನ್ನು ಎಲ್ಲಡೆ ಪಸರಿಸಲು ರಾಜ್ಯ ಸರಕಾರ ವಿನೂತನ ಕಾರ್ಯಕ್ರಮಗಳೊಂದಿಗೆ ರಥಯಾತ್ರೆಯ ಮೂಲಕ ಭಾಷಾ ಪ್ರೇಮವನ್ನು ಹೆಚ್ಚಿಸುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
    ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ ೫೦ರ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಸ್ವಾಗತಿಸಿ ಬಳಿಕ ಮಾತನಾಡಿದರು.
 ಈಗಾಗಲೇ ವ್ಯವಹಾರಿಕವಾಗಿ ಬಹುಭಾಷೆ ಕಲಿಕೆ ಅನಿವಾರ್ಯವಾದರೂ ಹೃದಯದ ಭಾಷೆ ನಮ್ಮ ಕನ್ನಡವಾಗಿದೆ. ಚದುರಿ ಹೋಗಿದ್ದ ಕನ್ನಡ ನಾಡು ಏಕೀಕೃತಗೊಂಡ ನಂತರದ ಮೈಸೂರು ರಾಜ್ಯ ಉದಯವಾಗಿ ನಂತರ ಕರ್ನಾಟಕ ಎಂದು ಮರುನಾಮಕರಣಗೊಂಡು ೫೦ ವರ್ಷವಾದ ಹಿನ್ನೆಲೆಯಲ್ಲಿ ಈ ರಥಯಾತ್ರೆಯನ್ನು ಸರ್ಕಾರ ಆಯೋಜಿಸಿದೆ.
 ಇದು ಕೇವಲ ರಥಯಾತ್ರೆಯಲ್ಲ. ನಮ್ಮಲ್ಲಿ ಅಂತರ್ಗತವಾಗಿರುವ ಕನ್ನಡ ಭಾಷಾ ಪ್ರೇಮವನ್ನು ಉದ್ದೀಪಿಸುವ ಯಾತ್ರೆ. ಜೀವನಕ್ಕೆ ಹಲವಾರು ಭಾಷೆಗಳು ಅಗತ್ಯವಾದರೂ ಆಡಲು ಕನ್ನಡ ಭಾಷೆ ಎಂಬ ಪ್ರೇಮವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.
    ಪುರಸಭಾ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಕನ್ನಡದ ಮನಸ್ಸುಗಳನ್ನು ಗಟ್ಟಿಗೊಳಿಸುವ ಮೂಲಕ ರಥಯಾತ್ರೆಯ ರಾಜ್ಯದ್ಯಾಂತ ಸಂಚರಿಸುತ್ತಿದೆ. ಸಾಹಿತ್ಯ, ಭಾಷಾ ಮತ್ತು ಕನ್ನಡಬಗೆಗಿನ ನಮ್ಮತನದ ಉಳಿವಿಗೆ ನಾವೆಲ್ಲರೂ ಕಟ್ಟಿಬದ್ದರಾಗಬೇಕಿದೆ. ಕನ್ನಡದ ಕೆಲಸಗಳಿಗೆ ಮುಂದಾಗುವ ಕಸಾಪ ಹಾಗೂ ಸಂಘ ಸಂಸ್ಥೆಗಳಿಗೆ ಪುರಸಭೆಯು ನಿರಂತರವಾಗಿ ಕೈಜೋಡಿಸಲಿದೆ ಎಂದರು.
     ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣ ಗೆಗೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆರು ಹಾಗೂ ಅಧಿಕಾರಿ ವರ್ಗದವರು ಮೆರವಣ ಗೆಯಲ್ಲಿ ಭಾಗವಹಿಸಿ ವಿಜಯಲಕ್ಷಿ ಚಿತ್ರಮಂದಿರದ ವರೆಗೆ ಹೆಜ್ಜೆ ಹಾಕಿ ರಥಯಾತ್ರೆಯನ್ನು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್. ಪೂಣ ðಮಾ, ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಸಿಡಿಪಿಒ ಶಿವಪ್ರಕಾಶ್, ನರೇಗಾ ಸಹಾಯಕ ನಿರ್ದೇಶಕ ಕಲ್ಲಪ್ಪ, ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಿಇಓ ಆರ್.ಸಿದ್ದರಾಜು ನಾಯ್ಕ, ಪುರಸಭಾ ಸದಸ್ಯರಾದ ಈರಳ್ಳಿ ರಮೇಶ್, ಮರಗುದ್ದಿ ಮನು, ಸುಧಾ ಉಮೇಶ್, ಕಸಾಪ ಪದಾಧಿಕಾರಿಗಳಾದ ಬಿ.ಪ್ರಕಾಶ್, ಕೃಷ್ಣಸ್ವಾಮಿ, ಕೆ.ಪಿ. ಪ್ರವೀಣ್, ಲತಾರಾಜಶೇಖರ್ ಮತ್ತಿತರಿದ್ದರು.

ಶನಿವಾರ, ಸೆಪ್ಟೆಂಬರ್ 21, 2024

ಕನ್ನಡ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ



ಚಿಕ್ಕಮಗಳೂರು:ಮೈಸೂರು ರಾಜ್ಯ ಕರ್ನಾಟಕ ಎಂದು ನಾಮಕರಣವಾಗಿ ೫೦ವರ್ಷ ಪೂರೈಸಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಹಮ್ಮಿಕೊಂಡಿರುವ ಕರ್ನಾಟಕ ಸಂಭ್ರಮ-೫೦ ರ ಸಂಭ್ರಮದ  ಕನ್ನಡ ಜ್ಯೋತಿ ರಥಯಾತ್ರೆ ರಾಜ್ಯಾದ್ಯಂತ ಸಂಚರಿಸಿ ಕನ್ನಡ ಜಾಗೃತಿ ಮೂಡಿಸಲಿ ಎಂದು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಶನಿವಾರ ಕನ್ನಡ ಜ್ಯೋತಿ ರಥಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕರ್ನಾಟಕಕ್ಕೆ ಮರುನಾಮಕರಣವಾಗಿ ಕರ್ನಾಟಕ ಎಂಬ ಹೆಸರು ಘೋಷಣೆಯಾದ ೫೦ ವರ್ಷದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕನ್ನಡದ ಹಿರಿಮೆ, ಕನ್ನಡದ ಗರಿಮೆ, ಕನ್ನಡ ಶಕ್ತಿ, ಕನ್ನಡದ ಮಣ ್ಣನ ವಾಸನೆಯ ಪರಿಕಲ್ಪನೆಯನ್ನು ಈ ರಥಯಾತ್ರೆ ಸಾರುತ್ತದೆ. ಎಂಟು ಜ್ಞಾನಪೀಠ ಪ್ರಶಸ್ತಿ ಪಡೆದ ಸಾಹಿತಿಗಳಿರುವ ಕನ್ನಡ ಭಾಷೆಯ ಬಗ್ಗೆ ಹೆಮ್ಮೆ ಮೂಡುತ್ತದೆ. ಕನ್ನಡದ ರಥ ಸಂಚರಿಸಿದಲ್ಲೆಲ್ಲಾ ಕನ್ನಡದ ವಾತಾವರಣ ಸೃಷ್ಟಿಯಾಗಲಿ. ಕನ್ನಡದ ಶಕ್ತಿ ಸಾಮರ್ಥ್ಯಗಳು ವೃದ್ದಿಸಲಿ. ಕನ್ನಡ ಭಾಷೆ ಕರ್ನಾಟಕದಲ್ಲಿ ಮಾತ್ರವಲ್ಲದೇ ಇಡೀ ಭಾರತದೆಲ್ಲಡೆ ಪ್ರಜ್ವಲಿಸುವಂತಹ ಸಂಭ್ರಮದ ಕ್ಷಣ ಮೂಡಿ ಬರಲಿ ಎಂದರು.
ವಿಧಾನ ಸಭಾ ಶಾಸಕರಾದ ಹೆಚ್.ಡಿ ತಮ್ಮಯ್ಯ ಮಾತನಾಡಿ, ಕನ್ನಡ ನಾಡು ನುಡಿಗೆ ತನ್ನದೇ ಆದ ಶ್ರೀಮಂತಿಕೆ ಇದೆ. ಕನ್ನಡಿಗರೆಲ್ಲರೂ ಒಗ್ಗಟ್ಟಿನಿಂದ ಕನ್ನಡ ಸಂಸ್ಕೃತಿ ಮತ್ತು ಪರಂಪರೆಯನ್ನು ಉಳಿಸಲು ಹಾಗೂ ಬೆಳೆಸಿಕೊಂಡು ಹೋಗಲು ಶ್ರಮಿಸಬೇಕಿದೆ. ಕನ್ನಡ ಜ್ಯೋತಿ ರಥಯಾತ್ರೆಯೂ ಕರ್ನಾಟಕ ಎಂದು ನಾಮಕರಣಗೊಂಡ ಐತಿಹಾಸಿಕ ಕ್ಷಣವನ್ನು ಮೆಲುಕು ಹಾಕಲು ಮತ್ತು ಕನ್ನಡ ನಾಡು ನುಡಿಗೆ ದುಡಿದವರ ಸ್ಮರಣೆಗೆ ಕಾರಣವಾಗಲಿ ಎಂದರು.
ವಿಧಾನಸಭೆ ಶಾಸಕರಾದ ಎಸ್.ಎಲ್.ಭೋಜೇಗೌಡ ಮಾತನಾಡಿ, ಕನ್ನಡ ಮಾತನಾಡುವುದಕ್ಕೆ ಮಾತ್ರ ಸೀಮಿತವಾಗಬಾರದು. ರಾಜ್ಯೋತ್ಸವದಂತಹ ಕಾರ್ಯಕ್ರಮದಲ್ಲಿ ಸಂಭ್ರಮಾಚರಣೆಗೆ ಸೀಮಿತವಾಗಬಾರದು. ಕವಿಗಳು ಕೊಟ್ಟ ಕವಿವಾಣ ಯಂತೇ ನಡೆದರೇ ಕನ್ನಡ ಏಳಿಗೆ ಸಾಧ್ಯವಾಗುತ್ತದೆ. ಕನ್ನಡದ ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ಆಚರಿಸಬೇಕಾದ ಅಗತ್ಯವಿದೆ. ಕನ್ನಡ ಶಾಲೆಗಳು ಮುಚ್ಚುತ್ತಿದೆ. ಇದರ ಬಗ್ಗೆ ಧ್ವನಿ ಎತ್ತಬೇಕಿದೆ. ಸರ್ಕಾರಿ ಶಾಲೆಗಳಲ್ಲಿ ಕಲಿತವರು ಹಲವು ಕ್ಷೇತ್ರದಲ್ಲಿ ಸಾಧಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಬಗ್ಗೆ ಕನ್ನಡ ಶಾಲೆಗಳ ಬಗ್ಗೆ ಕೀಳರಿಮೆ ಬೇಡ ಎಂದರು.
ವಿಧಾನ ಪರಿಷತ್ ಶಾಸಕರಾದ ಸಿ.ಟಿ ರವಿ ಮಾತನಾಡಿ, ಕರ್ನಾಟಕ ಎಂದು ಮರುನಾಮಕರಣವಾದ ಸಂದರ್ಭದಲ್ಲಿ ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಕವಿವಾಣ  ಮೂಡಿತು.  ಕರ್ನಾಟಕ ಮರುನಾಮಕರಣದ  ವರ್ಷಗಳ ಅವಲೋಕನ ನಡೆಸಿದರೇ ನಾವು ಎಲ್ಲಿಗೆ ಬಂದು ನಿಂತಿದ್ದೇವೆ. ಎಲ್ಲಿಗೆ ಬಂದು ನಿಂತಿದ್ದೇವೆ ಎನ್ನುವುದನ್ನು ಗಂಭೀರವಾಗಿ ಆಲೋಚಿಸಬೇಕಿದೆ.  ಹೆಸರೇನೋ ಕರ್ನಾಟಕವಾಯ್ತು. ಆದರೆ ಕನ್ನಡ ಯಾವ ಪ್ರಮಾಣದಲ್ಲಿ ಕನಸು ಕಟ್ಟಿ ಉಸಿರಾಗಬೇಕೆಂದು ಬಯಸಿದ್ದೇವೋ ರೀತಿ ಉಸಿರಾಗಲಿಲ್ಲ ಎಂದರು.
ಈ ಸಂದರ್ಭದಲಿ ್ಲ ಸಗರಸಭೆ ಅಧ್ಯಕ್ಷರಾದ ಸುಜಾತ ಶಿವಕುಮಾರ್,  ಜಿಲ್ಲಾಧಿಕಾರಿಗಳಾದ ಮೀನಾ ನಾಗರಾಜ್, ಅಪರ ಜಿಲ್ಲಾಧಿಕಾರಿ ನಾರಾಯಣರೆಡ್ಡಿ ಕನಕ ರಡ್ಡಿ, ಅಡಿಷನಲ್ ಎಸ್‌ಪಿ ಕೃಷ್ಣಮೂರ್ತಿ,  ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಡಾ.ಸಿ ರಮೇಶ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ.ಮಂಜುಳಾ ಹುಲ್ಲಹಳ್ಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್, ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಹಾಗೂ ಕನ್ನಡ ಪರ ಸಂಘಟನೆಗಳ ಸದಸ್ಯರು, ಸಾಂಸ್ಕೃತಿಕ ವಲಯದ ಕಲಾವಿದರು, ಆಟೋ, ಟ್ಯಾಕ್ಸಿ ಸಂಘದ ಸದಸ್ಯರು ಇದ್ದರು.