ಭಾನುವಾರ, ಸೆಪ್ಟೆಂಬರ್ 22, 2024

ಕನ್ನಡ ಭಾಷಾಭಿಮಾನ ಮೂಡಿಸುವ ಕನ್ನಡ ಜ್ಯೋತಿ ರಥಯಾತ್ರೆ

ಕಡೂರು : ಜನಜಾಗೃತಿಯ ಮೂಲಕ ಭಾಷಾಭಿಮಾನವನ್ನು ಎಲ್ಲಡೆ ಪಸರಿಸಲು ರಾಜ್ಯ ಸರಕಾರ ವಿನೂತನ ಕಾರ್ಯಕ್ರಮಗಳೊಂದಿಗೆ ರಥಯಾತ್ರೆಯ ಮೂಲಕ ಭಾಷಾ ಪ್ರೇಮವನ್ನು ಹೆಚ್ಚಿಸುತ್ತಿದೆ ಎಂದು ಶಾಸಕ ಕೆ.ಎಸ್.ಆನಂದ್ ತಿಳಿಸಿದರು.
    ಪಟ್ಟಣದಲ್ಲಿ ಕರ್ನಾಟಕ ಸಂಭ್ರಮ ೫೦ರ ಕಾರ್ಯಕ್ರಮದ ಅಂಗವಾಗಿ ಆಗಮಿಸಿದ್ದ ಕನ್ನಡ ಜ್ಯೋತಿ ರಥಯಾತ್ರೆಯನ್ನು ಭಾನುವಾರ ಸ್ವಾಗತಿಸಿ ಬಳಿಕ ಮಾತನಾಡಿದರು.
 ಈಗಾಗಲೇ ವ್ಯವಹಾರಿಕವಾಗಿ ಬಹುಭಾಷೆ ಕಲಿಕೆ ಅನಿವಾರ್ಯವಾದರೂ ಹೃದಯದ ಭಾಷೆ ನಮ್ಮ ಕನ್ನಡವಾಗಿದೆ. ಚದುರಿ ಹೋಗಿದ್ದ ಕನ್ನಡ ನಾಡು ಏಕೀಕೃತಗೊಂಡ ನಂತರದ ಮೈಸೂರು ರಾಜ್ಯ ಉದಯವಾಗಿ ನಂತರ ಕರ್ನಾಟಕ ಎಂದು ಮರುನಾಮಕರಣಗೊಂಡು ೫೦ ವರ್ಷವಾದ ಹಿನ್ನೆಲೆಯಲ್ಲಿ ಈ ರಥಯಾತ್ರೆಯನ್ನು ಸರ್ಕಾರ ಆಯೋಜಿಸಿದೆ.
 ಇದು ಕೇವಲ ರಥಯಾತ್ರೆಯಲ್ಲ. ನಮ್ಮಲ್ಲಿ ಅಂತರ್ಗತವಾಗಿರುವ ಕನ್ನಡ ಭಾಷಾ ಪ್ರೇಮವನ್ನು ಉದ್ದೀಪಿಸುವ ಯಾತ್ರೆ. ಜೀವನಕ್ಕೆ ಹಲವಾರು ಭಾಷೆಗಳು ಅಗತ್ಯವಾದರೂ ಆಡಲು ಕನ್ನಡ ಭಾಷೆ ಎಂಬ ಪ್ರೇಮವನ್ನು ನಮ್ಮ ಮಕ್ಕಳಲ್ಲಿ ಬೆಳೆಸಬೇಕು ಎಂದು ಕರೆ ನೀಡಿದರು.
    ಪುರಸಭಾ ಅಧ್ಯಕ್ಷ ಭಂಡಾರಿಶ್ರೀನಿವಾಸ್ ಮಾತನಾಡಿ, ಕನ್ನಡದ ಮನಸ್ಸುಗಳನ್ನು ಗಟ್ಟಿಗೊಳಿಸುವ ಮೂಲಕ ರಥಯಾತ್ರೆಯ ರಾಜ್ಯದ್ಯಾಂತ ಸಂಚರಿಸುತ್ತಿದೆ. ಸಾಹಿತ್ಯ, ಭಾಷಾ ಮತ್ತು ಕನ್ನಡಬಗೆಗಿನ ನಮ್ಮತನದ ಉಳಿವಿಗೆ ನಾವೆಲ್ಲರೂ ಕಟ್ಟಿಬದ್ದರಾಗಬೇಕಿದೆ. ಕನ್ನಡದ ಕೆಲಸಗಳಿಗೆ ಮುಂದಾಗುವ ಕಸಾಪ ಹಾಗೂ ಸಂಘ ಸಂಸ್ಥೆಗಳಿಗೆ ಪುರಸಭೆಯು ನಿರಂತರವಾಗಿ ಕೈಜೋಡಿಸಲಿದೆ ಎಂದರು.
     ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಬಳಿಕ ಅಂಗನವಾಡಿ ಕಾರ್ಯಕರ್ತೆಯರು ಪೂರ್ಣಕುಂಭ ಸ್ವಾಗತದೊಂದಿಗೆ ಮೆರವಣ ಗೆಗೆ ಚಾಲನೆ ನೀಡಲಾಯಿತು. ಶಾಲಾ ಮಕ್ಕಳು, ಆಶಾ ಕಾರ್ಯಕರ್ತೆರು ಹಾಗೂ ಅಧಿಕಾರಿ ವರ್ಗದವರು ಮೆರವಣ ಗೆಯಲ್ಲಿ ಭಾಗವಹಿಸಿ ವಿಜಯಲಕ್ಷಿ ಚಿತ್ರಮಂದಿರದ ವರೆಗೆ ಹೆಜ್ಜೆ ಹಾಕಿ ರಥಯಾತ್ರೆಯನ್ನು ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸಿ.ಎಸ್. ಪೂಣ ðಮಾ, ಪುರಸಭಾ ಉಪಾಧ್ಯಕ್ಷೆ ಮಂಜುಳಾ ಚಂದ್ರು, ಮುಖ್ಯಾಧಿಕಾರಿ ಕೆ.ಎಸ್. ಮಂಜುನಾಥ್, ಸಿಡಿಪಿಒ ಶಿವಪ್ರಕಾಶ್, ನರೇಗಾ ಸಹಾಯಕ ನಿರ್ದೇಶಕ ಕಲ್ಲಪ್ಪ, ಕಸಾಪ ಜಿಲ್ಲಾಧ್ಯಕ್ಷ ಸೂರಿಶ್ರೀನಿವಾಸ್, ತಾಲ್ಲೂಕು ಅಧ್ಯಕ್ಷ ಸಿಂಗಟಗೆರೆ ಸಿದ್ದಪ್ಪ, ಬಿಇಓ ಆರ್.ಸಿದ್ದರಾಜು ನಾಯ್ಕ, ಪುರಸಭಾ ಸದಸ್ಯರಾದ ಈರಳ್ಳಿ ರಮೇಶ್, ಮರಗುದ್ದಿ ಮನು, ಸುಧಾ ಉಮೇಶ್, ಕಸಾಪ ಪದಾಧಿಕಾರಿಗಳಾದ ಬಿ.ಪ್ರಕಾಶ್, ಕೃಷ್ಣಸ್ವಾಮಿ, ಕೆ.ಪಿ. ಪ್ರವೀಣ್, ಲತಾರಾಜಶೇಖರ್ ಮತ್ತಿತರಿದ್ದರು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ