ಗುರುವಾರ, ಜುಲೈ 16, 2026

ಚೆಸ್ ಕ್ರೀಡಾಕೂಟದಲ್ಲಿ ಸುವಿಧ್ ಪಿ ಪ್ರಥಮ

ಕೊಟ್ಟಿಗೆಹಾರ:ವಲಯ ಮಟ್ಟದ ಚೆಸ್ ಕ್ರೀಡಾಕೂಟದಲ್ಲಿ ಬಣಕಲ್‌ನ ನಜರೆತ್ ಶಾಲೆಯ ವಿದ್ಯಾರ್ಥಿ ಸುವಿಧ್ ಪಿ ಪ್ರಥಮ ಸ್ಥಾನ ಪಡೆದಿದ್ದಾನೆ.

 ಉಡುಪಿ ಜಿಲ್ಲೆಯ ಶಿರೂರಿನ ಗ್ರೀನ್ ವ್ಯಾಲಿ ಶಾಲೆಯಲ್ಲಿ ನಡೆದ ೭ ಜಿಲ್ಲೆಗಳನ್ನೊಳಗೊಂಡ ೧೪ರ ವಯೋಮಾನದ ವಿಭಾಗದಲ್ಲಿ ಭಾಗವಹಿಸಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿದ್ದಾನೆ. ಸುವಿಧ್, ಶಿಕ್ಷಕ ಹಾಗೂ ಲೇಖಕ ಪೂರ್ಣೇಶ್ ಮತ್ತಾವರ ಮತ್ತು ಶಿಕ್ಷಕಿ ರೇಖಾಪೂರ್ಣೇಶ್ ದಂಪತಿಗಳ ಪುತ್ರ. ವಿದ್ಯಾರ್ಥಿಯ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ